ಗಿರೀಶ್ ಕಾರ್ನಾಡ್ರ ಧಾರವಾಡ ಮನೆ 2.48 ಕೋಟಿಗೆ ಮಾರಾಟ
ಧಾರವಾಡ: ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಧಾರವಾಡದ ಸಾರಸ್ವತಪುರದಲ್ಲಿದ್ದ ತಮ್ಮ (ಪಿತ್ರಾರ್ಜಿತ ಆಸ್ತಿ) ನಿವಾಸವನ್ನು ಪಶ್ಚಿಮ ಬಂಗಾಳ
ಮೂಲದ ನಿವೃತ್ತ ಐಎಎಸ್ ಅಧಿಕಾರಿ ಮಧು ಬಾಧುರಿಗೆ ಮಾರಾಟ ಮಾಡಿದ್ದಾರೆ.
ಮೂಲದ ನಿವೃತ್ತ ಐಎಎಸ್ ಅಧಿಕಾರಿ ಮಧು ಬಾಧುರಿಗೆ ಮಾರಾಟ ಮಾಡಿದ್ದಾರೆ.
ಮಧು ಬಾಧುರಿ ಈ ಹಿಂದೆ ಅಮೆರಿಕಕ್ಕೆ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದರು.
ಅಂದಾಜು 2.75 ಕೋಟಿ ರೂ.ಗೆ ಈ ಮನೆ ಮಾರಾಟವಾಗಿದೆ. ಮಂಗಳವಾರ ಮಧು
ಬಾಧುರಿ ಹೆಸರಿಗೆ ಮನೆಯ ಕಾಗದ ಪತ್ರಗಳು ನೋಂದಣಿಯಾಗಿವೆ. ಮಂಗಳವಾರ ಬೆಳಗ್ಗೆ 11:30ಕ್ಕೆ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ನಾಡ್, 12:30ರವರೆಗೂ ಕಚೇರಿಯಲ್ಲಿದ್ದು, ಕಾಗದ ಪತ್ರಗಳ ವ್ಯವಹಾರ ಮುಗಿಸಿ ತೆರಳಿದರು.
For North Karnataka News visit www.uksuddi.in